ದೇವದಾಸ್ಗೆ ಸಾರಾಯಿ ಶೀಶೆಯಲಿ ಹಾಡು
Posted date: 30/September/2010

ಎ.ಬಿ.ಸಿ.ಡಿ. ಶಾಂತಕುಮಾರ್ ಕಥೆ, ಚಿತ್ರಕಥೆ ರಚಿಸಿ, ನಿರ್ಮಾಣದ ಜೊತೆ ನಿರ್ದೇಶಿಸುತ್ತಿರುವ ದೇವದಾಸ್ ಚಿತ್ರಕ್ಕೆ ಈಗಾಗಲೇ ಮಾತಿನ ಭಾಗದ ಚಿತ್ರೀಕರಣ   ಹಾಗೂ ಡಬ್ಬಿಂಗ್ ಕಾರ್ಯ ಮುಗಿದಿದ್ದು.  ಕಳೆದವಾರ ಉಳಿದ ಹಾಡುಗಳ ಚಿತ್ರೀಕರಣ ಪ್ರಾರಂಭವಾಗಿದೆ.  ನೆಲಮಂಗಲದ ಹತ್ತಿರ ಚಾಮುಂಡೇಶ್ವರಿ ಡಾಬಾದಲ್ಲಿ ಯೋಗೇಶ್ ಹಾಗೂ ೫೦ ಜನ ನೃತ್ಯ ಕಲಾವಿದರೊಂದಿಗೆ ಸಾರಾಯಿ ಶೀಶೆಯಲಿ ನನ್ನ ದೇವಿ ಕಾಣುವಳು. ಸುಮಪಾನವೆ ಅವಳಾಗುತ ನನ್ನ ದೇಹ ಸೇರಿದಳು ಎಂಬ ಹಾಡಿಗೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.
ರೋಹಿಣಿ ಪ್ರಿಯ ಕ್ರಿಯೇಷನ್ಸ್ ಲಾಂಛನದಲ್ಲಿ ಜಿ. ನರಸಿಂಹ, ಬಿ.ಎ. ಕಿರಣ್ ಕುಮಾರ್ ಸಹ ನಿರ್ಮಾಣಪಕರಾಗಿರುವ ಈ ಚಿತ್ರಕ್ಕೆ ಜಿ. ರೇಣುಕುಮಾರ್ ಛಾಯಾಗ್ರಹಣ, ಜೋಶ್ವ ಶ್ರೀಧರ್ ಸಂಗೀತ, ಎಸ್. ಮಂಜುನಾಥ್ ಸಂಭಾಷಣೆ, ಶ್ಯಾಂ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ,  ಚಿತ್ರದ ತಾರಾಬಳಗದಲ್ಲಿ ಯೋಗೇಶ್, ಜೆನಾಲ್ ಪ್ಯಾಂಡೆ, ನತನ್ಯ, ತಾರಾ, ರಂಗಾಯಣ ರಘು, ಸಾಧುಕೋಕಿಲ, ರಮೇಶ್ ಭಟ್, ಧರ್ಮ, ಅರವಿಂದ್, ಪ್ರಮೀಣಾ ಜೋಶಾಯ್, ಇನ್ನೂ ಮುಂತಾದವರು ಇದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed